ಡಿಸಿಸಿ ಬ್ಯಾಂಕ್‌ಗೆ ಆಡಳಿತ ಮಂಡಳಿಗೆ ಚುನಾವಣೆ: 27 ನಾಮಪತ್ರ ಸಲ್ಲಿಕೆ 3 ಅವಿರೋಧ ಆಯ್ಕೆ?

0
1044

ಕಲಬುರಗಿ, ನ. 21: ಕಲಬುರಗಿ, ಯಾದ ಗಿರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಡೆಯಲಿರುವ ಸಾಮಾನ್ಯ ಆಡಳಿತ ಮಂ ಡಳಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸ ಲು ಕೊನೆಯ ದಿನವಾದ ಇಂದು ಒಟ್ಟು 27 ಜನರು ನಾಮಪತ್ರ ಸಲ್ಲಿಸಿದ್ದಾರೆ.
ಸಲ್ಲಿಸಿದ ನಾಮಪತ್ರಗಳ ಪರಿಶೀಲನೆಯು ನಾಳೆ ದಿನಾಂಕ 22ರಂದು ನಡೆಯಲಿದ್ದು, ನಾಮಪತ್ರ ಹಿಂಪಡೆಯಲು 23 ಕೊನೆಯ ದಿನವಾಗಿದೆ.
ಚುನಾವಣೆಯು 24.11.2020ರಂದು ನಡೆಯಲಿದೆ.
ಈಗಾಗಲೇ ನಾಮಪತ್ರ ಸಲ್ಲಿಸಿದ ಕ್ಷೇತ್ರ ವಾರುಗಳಂತೆ ಯಾದಗಿರ, ಶಹಾಪುರ ಮತ್ತು ಸುರಪುರ ತಾಲೂಕುಗಳ ಮತಕ್ಷೇತ್ರದ ಉಮೇ ದುವಾರರು ಅವಿರೋಧ ಆಯ್ಕೆ ಹೊಂದು ವ ಸಂಭವವಿದೆ.
ಒಟ್ಟಿನಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ 23ರಂದು ಸಂಜೆ ಅಂತಿಮವಾಗಲಿದೆ.

LEAVE A REPLY

Please enter your comment!
Please enter your name here