ರಾಜ್ಯದಲ್ಲಿ ಕೊರೊನಾಗೆ 114 ಮಂದಿ ಸಾವು ಹೊಸದಾಗಿ 8364 ಜನರಿಗೆ ಸೋಂಕು ದೃಢ

0
922

ಬೆಂಗಳೂರು, ಸೆ.19-ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟವನ್ನು ಮುಂದುವರಿಸಿದ್ದು, ಇಂದು 8,364 ಮಂದಿಯಲ್ಲಿ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 114 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7,922 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ರಾಜ್ಯದಲ್ಲಿ 10,815 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 5,11,346 ಸೋಂಕಿತರ ಪೈಕಿ 98,564 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 4,04,841 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 822 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 3,733 ಮಂದಿಗೆ ಸೋಂಕು ದೃಢವಾಗಿದ್ದು, 33 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,91,438ಕ್ಕೆ ಏರಿಕೆ ಆಗಿದೆ. 41434ಸಕ್ರಿಯ ಪ್ರಕರಣ ಗಳಿವೆ.
ಇನ್ನು ಉಳಿದಂತೆ ರಾಜ್ಯದ ಬಾಗಲಕೋಟೆಯಲ್ಲಿ 152, ಬಳ್ಳಾರಿ 300, ಬೆಳಗಾವಿ 100 ಬೆಂಗಳೂರು ಗ್ರಾಮಾಂತರ 189 , ಬೀದರ್23 ಚಾಮರಾಜನಗರ 72 ಚಿಕ್ಕಬಳ್ಳಾಪುರ 89, ಚಿಕ್ಕಮಗಳೂರು 165, ಚಿತ್ರದುರ್ಗ 84ದಕ್ಷಿಣ ಕನ್ನಡ 432, ದಾವಣಗೆರೆ 163 ಧಾರವಾಡ 264, ಗದಗ 391 ಹಾಸನ 19 ಹಾವೇರಿ 107 ಕಲಬುರಗಿ 110, ಕೊಡಗು 38 ಕೋಲಾರ 91, ಕೊಪ್ಪಳ 96 ಮಂಡ್ಯ 94ಮೈಸೂರು 626ರಾಯಚೂರು 156ರಾಮನಗರ 47 ಶಿವಮೊಗ್ಗ 106 ತುಮಕೂರು 159 ಉಡುಪಿ 215ಉತ್ತರ ಕನ್ನಡ 129 ವಿಜಯಪುರ 87 ಯಾದಗಿರಿ 127 ಹೊಸ ಪ್ರಕರಣಗಳು ವರದಿಯಾಗಿವೆ.

LEAVE A REPLY

Please enter your comment!
Please enter your name here