ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡೇಚೂರರಿಗೆ ಸಚಿವರಿಂದ ಸನ್ಮಾನ

0
637

ಕಲಬುರಗಿ, ಅ. 31: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಿ ಬಿಜೆಪಿಯ ಹಿರಿಯ ಧುರೀಣ ಮಹಾದೇವಪ್ಪ ಕಡೆಚೂರ ಅವರನ್ನು ಜಿಲ್ಲಾ ಉಸ್ತುವಾರಿ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಅಭಿನಂದಿಸಿ ಸನ್ಮಾನಿಸಿದರು.
ರವಿವಾರ ಸಂಜೆ ಕಡೆಚೂರ ಅವರ ನಿವಾಸಕ್ಕೆ ತೆರಳಿದ ಸಚಿವ ನಿರಾಣಿ ಅವರು ತಮ್ಮ ಸಂತೋಷ ವ್ಯಕ್ತಪಡಿಸುವುದರೊಂದಿಗೆ ಹಿರಿಯ ಧುರೀಣ ಮಹಾದೇವಪ್ಪ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಚಿವರೊಂದಿಗೆ ಶಾಸಕರುಗಳಾದ ಬಸವರಾಜ ಮತ್ತಿಮೂಡ, ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಅಧ್ಯಕ್ಷರಾದ ಸಿದ್ದಾಜಿ ಪಾಟೀಲ್, ಶಿವರಾಜ ರದ್ದೇವಾಡಗಿ, ಮತ್ತು ವೆಂಕಟೇಶ ಕಡೆಚೂರ, ಅಂಬಾರಾಯ ಬೆಳಕೋಟಾ, ನರಸಿಂಹನ್ ಮೆಂಡನ್ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here