ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ 5 ಜನ ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ 6 ಸ್ಥಾನಗಳಿಗೆ ಕಣದಲ್ಲಿ 12 ಅಭ್ಯರ್ಥಿಗಳು, ಅವಿರೋಧವಾಗಿ ಆಯ್ಕೆಗೊಂಡ 7 ಜನ ಅಭ್ಯರ್ಥಿಗಳು

0
1462

ಕಲಬುರಗಿ, ನ. 21: ಕಲಬುರಗಿ, ಯಾದ ಗಿರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಇದೇ ತಿಂಗಳು 29ರಂದು ನಡೆಯಲಿರುವ ಸಾಮಾನ್ಯ ಆಡಳಿತ ಮಂಡಳಿ ಚುನಾ ವಣೆಯಲ್ಲಿ ಅಂತಿಮವಾಗಿ 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಇಂದು 5 ಜನ ನಾಮಪತ್ರಗಳನ್ನು ವಾಪ ಸ್ಸು ಪಡೆದಿದ್ದು, ನಾಮಪತ್ರ ಮರಳಿ ಪಡೆಯ ಲು ಇಂದು (23) ಕೊನೆಯ ದಿನವಾಗಿತ್ತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳ ಎ ವರ್ಗದ ಮತಕ್ಷೇತ್ರದಿಂದ ಆಳಂದ ದಿಂದ ಕಲ್ಲಪ್ಪ ಸಿದ್ರಾಮಪ್ಪ ಹತ್ತರಕಿ, ಜೇವರ್ಗಿ ಯಿಂದ ಬಸವರಾಜ ಪ್ರಭುರಾಯ ಖಾನ ಗೌಡ್ರ, ಅಫಜಲಪೂರದಿಂದ ಸೋಮ ನಾಥ ಶರಣಬಸಪ್ಪಾ ನೂಲಾ ಹಾಗೂ ಇತರೆ ಸಹಕಾರ ಸಂಘಗಳ ಡಿ ವರ್ಗದ ಮತಕ್ಷೇ ತ್ರದಿಂದ ಜೇವರ್ಗಿಯಿಂದ ಬಸವರಾಜ ಮಲ್ಲಪ್ಪ ಪೂಜಾರಿ ಹಾಗೂ ಕಲ್ಯಾಣಪ್ಪ ಶಿವ ಶರಣಪ್ಪ ಅವರುಗಳು ನಾಮಪತ್ರ ವಾಪಸ್ಸು ಪಡೆದವರಾಗಿದ್ದಾರೆ.
7 ಜನ ಅಭ್ಯರ್ಥಿಗಳು ಅವಿರೋ ಧವಾಗಿ ಆಯ್ಕೆಗೊಂಡಿದ್ದಾರೆ.
ಕಲಬುರಗಿಯಿAದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಲಬುರಗಿ ಮತ ಕ್ಷೇತ್ರದಿಂದ ಶರಣಬಸಪ್ಪ ಬಸವಂತರಾಯ ಪಾಟೀಲ್, ಸುರಪುರ ಮತಕ್ಷೇತ್ರದಿಂದ ಬಾಪುಗೌಡ ದುಂಡಪ್ಪಗೌಡ, ಸೇಡಂ ಮತ ಕ್ಷೇತ್ರದಿಂದ ನಂದಕಿಶೋರ ರೆಡ್ಡಿ ಜನಾರ್ಧನ ರೆಡ್ಡಿ, ಆಳಂದ ಮತಕ್ಷೇತ್ರದಿಂದ ಅಶೋಕ ಕಲ್ಯಾಣಪ್ಪ ಸಾವಳೇಶ್ವರ, ಯಾದಗಿರ ಮತ ಕ್ಷೇತ್ರದಿಂದ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನರೆಡ್ಡಿ ಅಫಜಲಪುರ ಮತಕ್ಷೇತ್ರದಿಂದ ಮಹಾಂತ ಗೌಡ ಸಿದ್ದಣ್ಣಗೌಡ ಪಾಟೀಲ್ ಮತ್ತು ಸುರ ಪುರ ಮತಕ್ಷೇತ್ರದಿಂದ ಸುರೇಶ ರಾಜಶೇಖ ರಪ್ಪ ಸಜ್ಜನ ಅವರುಗಳೇ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ.
ಒಟ್ಟು 13 ಕ್ಷೇತ್ರಗಳಿಗಾಗಿ ನಡೆಯಲಿರುವ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ 7 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಅಂತಿಮವಾಗಿ 14 ಅಭ್ಯ ರ್ಥಿಗಳು 6 ಸ್ಥಾನಗಳಿಗಾಗಿ ಚುನಾವಣಾ ಕಣದಲ್ಲಿದ್ದಾರೆ.

LEAVE A REPLY

Please enter your comment!
Please enter your name here