ಪತ್ರಕರ್ತ ಗುಣಶೇಖರ ಸ್ವಾಮಿ ನಿಧನ

0
1159

ಕಲಬುರಗಿ, ನ. 14: ಸ್ಥಳೀಯ ಗ್ರಿನೋ ಬಲ್ಸ್ ದಿನಪತ್ರಿಕೆಯ ಸ್ಥಳೀಯ ಸಂಪಾದ ಕರಾಗಿದ್ದ ಗುಣಶೇಖರ ಸ್ವಾಮಿ ಅವರು ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನ ರಾದರೆಂದು ತಿಳಿಸಲು ವಿಷಾಧವೇನಿಸುತ್ತದೆ.
ದಿವಂಗತರಿಗೆ 62 ವರ್ಷ ವಯಸ್ಸಾಗಿ ತ್ತು. ಶ್ರೀ ಗುಣಶೇಖರ ಸ್ವಾಮಿ ಅವರು ಕಳೆದ 30 ವರ್ಷಗಳಿಂದ ಗ್ರಿನೋಬಲ್ಸ್ ಪತ್ರಿಕೆಯ ಲ್ಲಿ ಕೆಲಸ ಮಾಡುತ್ತಿದ್ದರು, ಕಳೆದ 10 ವರ್ಷ ಗಳಿಂದ ಪತ್ರಿಕೆಯ ಸಂಪಾದಕರಾಗಿಯೂ ಕೂಡಾ ಸೇವೆ ಸಲ್ಲಿಸುತ್ತಿದ್ದರು.
ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಪುತ್ರ ಹಾಗೂ ಪತ್ನಿ ಸೇರಿದಂತೆ ಇನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ನಾಳೆ ದಿನಾಂಕ 15.11.2020ರಂದು ನಗರದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಭವಾನಿಸಿಂಗ್ ಠಾಕೂರ ಹಾಗೂ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here