ಸಂವಿಧಾನ ಬದಲಾಯಿಸುವ ಕೃತ್ಯಕ್ಕೆ ಕೈ ಹಾಕಿದರೆ ರಕ್ತ ಕ್ರಾಂತಿ.ಪರೋಕ್ಷವಾಗಿ ಬಿಜೆಪಿ, ಆರ್ ಎಸ್ ಎಸ್ ಗೆ ಎಂ ವೈ ಪಾಟೀಲ್ ಎಚ್ಚರಿಕೆ

0
206

ಅಫಜಲಪೂರ : ಈ ದೇಶ ನಿಂತಿರುವದು ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಸಂವಿಧಾನದ ಮೇಲೆ ಹಾಗಾಗಿ ಒಂದು ವೇಳೆ ಅದನ್ನು ಬದಲಾಯಿಸುವ ಕರ‍್ಯಕ್ಕೆ ಯಾರಾದರೂ ಕೈ ಹಾಕಿದರೆ ಈ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಂದು ಶಾಸಕ ಎಂ ವೈ ಪಾಟೀಲ ಹೇಳಿದರು. ಪಟ್ಟಣದ ನ್ಯಾಷನಲ್ ಪಂಕ್ಷನ್ ಹಾಲ್ ನಲ್ಲಿ ನಡೆದ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ 134 ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಬುದ್ಧ ಪರ‍್ಣಿಮೆಯಂದು ಡಾ. ಬಿ ಆರ್ ಅಂಬೇಡ್ಕರ ಅವರ ಜಯಂತಿ ನಡೆದಿದ್ದು ನಿಜಕ್ಕೂ ಅವಿಸ್ಮರಣೀಯ.ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಜಯಂತಿ ಆಚರಣೆಯಾಗುವದು ಅಂಬೇಡ್ಕರ ಅವರ ಹೆಸರಿನ ಮೇಲೆ ಎಂದು ಹೇಳಿದರು.
ಕಳೆದ ಬಾರಿ ನಡೆದ ಜಯಂತಿಗೂ ಹಾಗೂ ಈ ಬಾರಿ ನಡೆಯುವ ಜಯಂತಿಯನ್ನು ಅದೆಷ್ಟು ಪರಿಣಾಮಕಾರಿಯಾಗಿ ಆಚರಿಸುತ್ತಿದ್ದೇವೆ ಎಂಬದು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕು, ಏಕೆಂದರೆ ನಾವು ಅವರ ಸಿದ್ದಾಂತ ಅವರ ತತ್ವಗಳನ್ನು ಅಳವಡಿಸಿಕೊಂಡು ಬದುಕಬೇಕು ಆದರೆ ಆ ಕೆಲಸವಾಗುತ್ತಿಲ್ಲ. ಜೊತೆಗೆ ಶಿಕ್ಷಣದಲ್ಲಿ ಈ ರ‍್ಗದ ಜನ ಅತೀ ಹಿಂದುಳಿದವಾರಗಿದ್ದು ಹಾಗಾಗಿ ರ‍್ಕಾರ ಎಲ್ಲ ಸೌಲಭ್ಯ ನೀಡಿದರು ಪರಿಣಾಮಕಾರಿಯಾಗುತ್ತಿಲ್ಲ,ಅಂಬೇಡ್ಕರ ವಿಚಾರದಾರೆ ಮೇಲೆ ಮಕ್ಕಳನ್ನು ಬೆಳಸಿ ಅಂದಾಗ ಮಾತ್ರ ಪ್ರತಿಯೊಂದು ಮನೆಯಲ್ಲಿ ಅಂಬೇಡ್ಕರಂತಹ ಮಕ್ಕಳು ಬೆಳೆಯಲು ಸಾಧ್ಯ ಎಂದರು.ಬಾಬಾ ಸಾಹೇಬರ ಅಂಬೇಡ್ಕರ ಬರೆದಿರುವ ಸಂವಿಧಾನವನ್ನು ಮರ‍್ಪಡು ಮಾಡಲು ಕೆಲವು ಕುತಂತ್ರಗಳು ನಡೆಯುತ್ತಿದ್ದು ಒಂದು ವೇಳೆ ಅಂತಃ ಕರ‍್ಯಕ್ಕೆ ಯಾರಾದರೂ ಕೈ ಹಾಕಿದರೆ ಈ ದೇಶದಲ್ಲಿ ದೊಡ್ಡ ಕ್ರಾಂತಿ ಯಾದಿತ್ತು ಎಂದು ಸಭೆಯ ಮೂಲಕ ಪರೋಕ್ಷವಾಗಿ ಬಿಜೆಪಿಯ ಹಾಗೂ ಆರ್ ಎಸ್ ಎಸ್ ನ ಕೆಲವು ನಾಯಕರಿಗೆ ಎಚ್ಚರಿಕೆ ನೀಡಿದರು. ಕರ‍್ಯಕ್ರಮದಲ್ಲಿ ದಿವ್ಯಾ ಸಾನಿಧ್ಯ ವಹಿಸಿ ಮಾತನಾಡಿದ ಷ. ಬ. ಶ್ರೀ ವಿಶ್ವರಾಧ್ಯ ಮಳೆಂದ್ರ ಶಿವಾಚರ‍್ಯರು ರ‍್ಧ ರಾತ್ರಿಯಲ್ಲಿ ಎದ್ದು ಹೋದವರೆಲ್ಲರೂ ಗೌತಮ ಬುದ್ಧರಾಗಲು ಸಾಧ್ಯವಿಲ್ಲ, ಅದರಂತೆ ಸಂವಿಧಾನ ಬರೆದ ವಿವಿಧ ದೇಶದ ಜನ ಅಂಬೇಡ್ಕರ ಅವರಂತೆ ಆಗುವದಿಲ್ಲ ಹಾಗಾಗಿ ಅಂಬೇಡ್ಕರ ಒಬ್ಬರು ದೇಶ ಕಂಡ ಹಾಗೂ ವಿಶ್ವ ಕಂಡ ಅಪ್ರತಿಮ ನಾಯಕರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವರು ಎಂದರು.ನಂತರ ಮಾತನಾಡಿದ ಮಾಜಿ ಜಿಲ್ಲಾಪಂಚಾಯತ ಅಧ್ಯಕ್ಷ ನಿತೀನ ಗುತ್ತೇದಾರ ಬಾಬಾ ಸಾಹೇಬ ಅಂಬೇಡ್ಕರ ಅವರ ಕನಸು ಅಸ್ಪೃಶ್ಯತೆ ಹೋಗಲಾಡಿಸಬೇಕು ಎಂಬುದು ಇತ್ತು ಅದನ್ನು ನಾವೆಲ್ಲರೂ ಸೇರಿಕೊಂಡು ನರ‍್ಮೂಲನೆ ಮಾಡಬೇಕು ಎಂದರು. ಸಂವಿಧಾನವಿಲ್ಲದೆ ಏನು ಇಲ್ಲಾ ಸಂವಿಧಾನ ಇಲ್ಲದೆ ಇದ್ದರೆ ನಾನು ಜಿಲ್ಲಾ ಪಂಚಾಯತ ಅಧ್ಯಕ್ಷನಾಗುತ್ತಿರಲಿಲ್ಲ ಎಂದರು.ಈ ಸಂರ‍್ಭದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಮಳೆಂದ್ರ ಶಿವಾಚರ‍್ಯರು ,ಯೋಗಿರಾಜ ಶಾಸ್ತ್ರೀ ಖಾನಾಪುರ,ಅಲಮೇಲೆ ಶ್ರೀಗಳು ವಹಿಸಿಕೊಂಡರು.ವೇದಿಕೆ ಮೇಲೆ ಮಹಾನಾಯಕ ಧಾರಾವಾಹಿಯ ಬಾಲ ನಟ ಆಯುಧ ಬಾನುಶಾಲಿ ಅರವಿಂದ ಗುತ್ತೇದಾರ, ನಿತೀನ ಗುತ್ತೇದಾರ, ಪಪ್ಪು ಪಟೇಲ್, ಆಯುಧ ಬಾನುಶಾಲಿ, ಕುಮಾರ ಕೋಳಿಗೆರಿ, ತಹಸೀಲ್ದಾರ ದಾಸರ, ಸುಹಾಸಿನಿ ಖೆಳಗಿ, ವಿಜಯ ಕುಮಾರ ಸಾಲಿಮನಿ, ಮತಿನ ಪಟೇಲ, ಶಂಕು ಮ್ಯಾಕೇರಿ, ನಾಗೇಶ ಕೊಳ್ಳಿ,ಅಶೋಕ ಗುಡ್ಡಡಗಿ,ರಾಜೂಗೌಡ ಅವರಳ್ಳಿ, ಸಂಜುಕುಮಾರ ಬಗಲಿ, ಚಂದ್ರಶೇಖರ ರ‍್ಜಗಿ, ಪ್ರಭಾವತಿ ಮೇತ್ರೆ, ಎಸ್ ಎಸ್ ಪಾಟೀಲ್, ದಯಾನಂದ ದೊಡ್ಮನಿ, ವಿಶ್ವನಾಥ ಕರ‍್ನಾಡ, ದಾನು ಪತಾಟೆ, ಶಿವಾನಂದ ಗಾಡಿಸಾಹುಕಾರ, ಬಿ ಎಂ ರಾವ, ಭೀಮರಾಯ ಗೌರ,ಅನುಸುಭಾಯಿ ಸುಲೇಕರ, ಪ್ರತಿಭಾ ಮಹೇಂದ್ರಕರ, ರಾಜು ಅರೇಕಾರ ಮಹಾಂತೇಶ ಬಳೂಂಡಗಿ, ಪ್ರಕಾಶ ಜಮಾದಾರ, ಸಿದ್ದರ‍್ಥ ಬಸರೀಗಿಡ, ಶರಣು ಅವಟೆ,ರಮೇಶ ಪೂಜಾರಿ, ಮಹದೇವ ಬಂಕಲಗಿ, ರವಿ ಗೌರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here