ನಗರದ ಕುರುಣೇಶ್ವರ ಮಂದರಿದಲ್ಲಿ ಆಗಸ್ಟ 2ರಂದು ಉಪಾಕರ್ಮ ಕಾರ್ಯಕ್ರಮ

0
321

ಕಲಬುರಗಿ, ಜುಲೈ, 31: ಕರುಣೇಶ್ವರ ನಗರದ ಜೈ ವೀರ ಹನುಮಾನ ಮಂದಿರದಲ್ಲಿ ನೂತನ ಉಪಾಕರ್ಮ ಮತ್ತು ಶ್ರಾವಣಿ ಕಾರ್ಯಕ್ರಮವನ್ನು ಆಗಸ್ಟ್ 2ರಂದು ಬೆಳಿಗ್ಗೆ 7 ರಿಂದ ಆಯೋಜಿಸಲಾಗಿದೆ.
ಉಪಾಕರ್ಮವನ್ನು ಶ್ರಾವಣಮಾಸದಲ್ಲಿರುವ ಬರುವ ಶ್ರವಣಾ ನಕ್ಷತ್ರದ ದಿನದಂದು ಋಗ್ವೇದಿಗಳು, ಶ್ರಾವಣ ಶುಕ್ಲದ ಪೂರ್ಣಿಮಾದಂದು ಯಜುರ್ವೇದಿಗಳು ಉಪಾಕರ್ಮವನ್ನು ಮಾಡಿಕೊಳ್ಳಬೇಕು. ಅಂದು ನಾವು ಕಲಿತ ವೇದಮಂತ್ರಗಳನ್ನು ಭಗವಂತನಿಗೆ ಅರ್ಪಿಸುತ್ತಾ ಮತ್ತಷ್ಟು ಅಧ್ಯಯನವನ್ನು ಮಾಡುತ್ತೇವೆ ಎಂದು ಸಂಕಲ್ಪಿಸುವ ದಿನ.
ಈ ನೂತನ ಉಪಾಕರ್ಮ ಕಾರ್ಯಕ್ರಮವನ್ನು ದೇವಸ್ಥಾನ ಅಧ್ಯಕ್ಷರಾದ ಅವಿನಾಶ್ ಕುಲಕರ್ಣಿ, ರೇವೂರ್ ಅವರ ನೇತೃತ್ವದಲ್ಲಿ ಜರುಗಲಿದೆ.
ಉಪಾಕರ್ಮ ಎಂದರೆ ಉಪನಯನ ಆದವರು ವೇದಾಧ್ಯಯನವನ್ನು ಪುನರಾರಂಭ ಮಾಡುವ ಒಂದು ಸಂಸ್ಕಾರ, ಹಾಗಾಗಿ ಬಡಾವಣೆಯ ವಿಪ್ರ ಬಾಂಧವರೆಲ್ಲರೂ ದೇವಸ್ಥಾನಕ್ಕೆ ಆಗಮಿಸಿ ಯಜ್ಞೋಪವೀತ ಧಾರಣೆ ಮಾಡಬೇಕೆಂದು ವಿನುತ ಜೋಶಿ ತಿಳಿಸಿದ್ದಾರೆ.

Total Page Visits: 475 - Today Page Visits: 1

LEAVE A REPLY

Please enter your comment!
Please enter your name here