ಬಸವ ಜಯಂತಿ ನಿಮಿತ್ಯ ಮಧ್ಯ ಮಾರಾಟ ನಿಷೇಧ

0
757
whiskey and natural ice on old wooden table

ಕಲಬುರಗಿ, ಮೇ. 01: ವಿಶ್ವಗುರು ಮಹಾತ್ಮಾ ಬಸವೇಶ್ವರ ರವರ ಜಯಂತ್ಯೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಶಾಂತಿಯುತವಾಗಿ ಜಯಂತ್ಯೋತ್ಸವ ಆಚರಿಸಲು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಾಳೆ ದಿನಾಂಕ 2.5.2022ರ ಸಂಜೆ 6 ಗಂಟೆಯಿAದ ದಿನಾಮಕ 4.5.2022ರ ಬೆಳಗಿನ 6 ಗಂಟೆ ವರೆಗೆ ಎಲ್ಲಾ ತರಹದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಯಶವಂತ ವಿ. ಗುರುಕರ್ ಅವರು ಆದೇಶ ಜಾರಿಮಾಡಿದ್ದಾರೆ.
ಮೇ 2ರ ಸಂಜೆ 6 ರಿಂದ 4ರವರೆಗೆ ಎಲ್ಲ ಬಾರ್, ರೆಸ್ಟಾರೆಂಟ್, ವೈನ್ ಶಾಪಿಗಳು, ಹೋಲ್‌ಸೆಲ್ ಲಿಕ್ಕರ್ ಶಾಪೀಗಳು ಮುಚ್ಚಲು ಹಾಗೂ ಶೇಂಧಿ, ಸ್ವದೇಶಿ ಹಾಗೂ ವಿದೇಶಿ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುವುದನ್ನು ನಿಷೇಧಿಸಿ ಜಾರಿ ಮಾಡಿದ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here