![](https://manishpatrike.com/wp-content/uploads/2021/11/WhatsApp-Image-2021-11-03-at-13.32.10.jpeg)
![](https://manishpatrike.com/wp-content/uploads/2021/11/WhatsApp-Image-2021-11-03-at-13.32.10.jpeg)
ಅಫಜಲಪುರ, ನ. 03: ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ ಹಾಗೂ ದ್ವೀಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದ ಘಟನೆ ಅಫಜಲಪೂರ ಪಟ್ಟಣದ ಹೊರವಲಯದ ಭೀಮಾ ಕಛೇರಿಯ ಹಾದು ಹೋಗುವ ರಾಜ್ಯ ಹೆದ್ದಾರಿ (ಕಲಬುರಗಿ ರಸ್ತೆ) ಮೇಲೆ ನಡೆದಿದೆ.
ಈ ಘಟನೆ ಇಂದು ಸುಮಾರು 12 ಗಂಟೆಗೆ ನಡೆದಿದ್ದು, ಈ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನ ಸವಾರ ಸೇರಿದಂತೆ ಆತನ ಸ್ನೇಹಿತ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ದ್ವೀಚಕ್ರ ವಾಹನಗಳ ಮಧ್ಯ ಈ ಅಪಘಾತ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಗಳು ಗುರುತಿಸಲಾಗಿದ್ದು ಇವರು ಅಫಜಲಪೂರ ತಾಲೂಕಿನ ರೇವೂರ (ಕೆ) ಗ್ರಾಮದವರಾಗಿದ್ದು. ಆನಂದ ತಂದೆ ಮಲ್ಲಿನಾಥ ಪೊಲೀಸಪಾಟೀಲ್ (32), ಗೋವಿಂದ ತಂದೆ ಚಂದ್ರಶ್ಯಾ ಮ್ಯಾಕೇರಿ (31).
![](https://manishpatrike.com/wp-content/uploads/2021/11/WhatsApp-Image-2021-11-03-at-13.32.11-1.jpeg)
![](https://manishpatrike.com/wp-content/uploads/2021/11/WhatsApp-Image-2021-11-03-at-13.32.11-1.jpeg)
ಈ ಬಗ್ಗೆ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.