ಕಲಬುರಗಿ, ಆಗಸ್ಟ. 23: ಕಳೆದ ನಾಲ್ಕು ದಿನಗಳ ಹಿಂದೆಯಷ್ಟ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರೀ ಸದ್ದು ಬಂದಿದ್ದು ಮತ್ತೆ ಇಂದು ಅದೇ ಅನುಭವ ಜನತೆಗೆ ಆಗಿದ್ದು, ಇದರಿಂದ ಭಯದ ವಾತಾವರಣ ನಿರ್ಮಾಣ ವಾಗಿದೆ.
![](https://manishpatrike.com/wp-content/uploads/2021/08/Advertisement-1.jpg)
![](https://manishpatrike.com/wp-content/uploads/2021/08/Advertisement-1.jpg)
ಸೋಮವಾರ ಮುಂಜಾಣ 7.30ರ ಸುಮಾರು ಎರಡು ಬಾರಿ ಭೂಮಿಯಿಂದ ಭಾರೀ ಸದ್ದು ಕೇಳಿ ಬಂದಿದೆ.
ಇದರಿAದಾಗಿ ಜನರ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು, ಗಡಿಕೇಶ್ವರ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಭೂಮಿಯಲ್ಲಿ ಕೆಳಗಡೆ ಸುಣ್ಣದ ಕಲ್ಲುಗಳಿದ್ದು, ಮಳೆ ಹೆಚ್ಚಾಗಿ ಭೂಮಿಯೊಳಗೆ ನೀರಿನ ಹರಿವು ಉಂಟಾದ ಕಲ್ಲುಗಳು ಕರಗಿ ಈ ರೀತಿ ಸದ್ದು ಬರುವುದು ಸಾಮಾನ್ಯ ಎಂದು ಹೇಳಲಾಗಿದೆ.
ಇತ್ತೀಚೆಗೆ ಸೇಡಂ ಶಾಸಕ ರಾಜುಕುಮಾರ ಪಾಟೀಲ್ ತೇಲ್ಕೂರ್ ಮತ್ತು ಸಂಸತ್ ಸದಸ್ಯ ಡಾ. ಉಮೇಶ ಜಾಧವ ಅವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ಗಡಿಕೇಶ್ವರ ಒಂದೇ ಅಲ್ಲ ಇನ್ನು ಹಲವಾರು ಗ್ರಾಮಗಳಲ್ಲಿ ಈ ರೀತಿಯ ಶಬ್ಧ ಬರುತ್ತಿದ್ದು, ಈ ಬಗ್ಗೆ ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸುವ ಬಗ್ಗೆ ಹೇಳಿಕೆ ನೀಡಿದ್ದರಾದರು ಇನ್ನು ವರೆಗೆ ಯಾವ ವರದಿಯೂ ಕೂಡ ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಿಲ್ಲ.