ಸಹೋದರಿಗೆ ಚುಡಾಯಿಸಿದ್ದನ್ನು ಕೇಳಿದ ಸಹೋದರನಿಗೆ ಚಾಕುವಿನಿಂದ ಇರಿದು ಕೊಲೆ

0
1385

ಕಲಬುರಗಿ,ಮಾ.12-ತನ್ನ ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಜ್ ಸುಲ್ತಾನಪುರ ಹೊರವಲಯದ ಜಮೀನು ಒಂದರಲ್ಲಿ ನಿನ್ನೆ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಕೊಲೆಯಾದ ಯುವಕ ಜಗನ್ನಾಥ ಸಹೋದರಿಯನ್ನು ಗ್ರಾಮದಲ್ಲಿ ಕೆಲವರು ಚುಡಾಯಿಸುತ್ತಿದ್ದರು ಎನ್ನಲಾಗಿದ್ದು, ಇದನ್ನು ಜಗನ್ನಾಥ ಪ್ರಶ್ನೆ ಮಾಡಿ, ಇನ್ನೊಮ್ಮೆ ತನ್ನ ತಂಗಿಯ ತಂಟೆಗೆ ಬರದಂತೆ ಜಗಳವಾಡಿದ್ದನೆಂದು ಹೇಳಲಾಗಿದೆ.
ಆಟೋ ಚಾಲಕನಾಗಿದ್ದ ಜಗನ್ನಾಥನನ್ನು ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಮಹಾಶಿವರಾತ್ರಿಯ ದಿನ ಅಂದರೆ ನಿನ್ನೆ ರಾತ್ರಿ ಕಮಲಾಪುರ ಹೊರವಲಯದ ಜಮೀನಿಗೆ ಕರೆದುಕೊಂಡು ಹೋಗಿ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಈ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಜಗನ್ನಾಥ ಕುಟುಂಬ ದವರು ಕೊಟ್ಟರಗಾ ಗ್ರಾಮದ ನಾಗರಾಜ, ಕಲಬುರಗಿಯ ಚನ್ನವೀರ ನಗರದ ನಾಗರಾಜ ಮತ್ತು ದತ್ತು ಎಂಬಾತ ಸೇರಿ ಐವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆ ಪಿಐ ಬಾಸು ಚವ್ಹಾಣ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here