ರಾವೂರ ಬಳಿ ಅಪಘಾತ ಮೂರು ಜನರ ಸಾವು

0
1345

ವಾಡಿ,ಜ.11- ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಯುವತಿ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವಾಡಿ ಸಮೀಪದ ರಾವುರ್ ಗ್ರಾಮದ ಸುಣ್ಣದ ಭಟ್ಟಿ ಬಳಿ ಇಂದು ಬೆಳಗಿನಜಾವ ಸಂಭವಿಸಿದೆ.
ಮೃತರನ್ನು ಚಿತ್ತಾಪುರ ತಾಲ್ಲೂಕಿನ ರಾವುರ ಗ್ರಾಮದ ಭೀಮಾಶಂಕರ ಸುಭಾಸ ಪ್ಯಾಟಿ (20), ಅಕ್ಬರ್ ಗುಡು ಪಟೇಲ್ (20) ಮತ್ತು ಭಾಗ್ಯಶ್ರೀ ತಂದೆ ಬಸವರಾಜ (18) ವರ್ಷ ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ ಈ ಅಪಘಾತ ನಡೆದಿದ್ದು ಎನ್ನಲಾಗಿದ್ದು, ಮೃತಪಟ್ಟ ಮೂರು ಜನರು ಬೈಕ್ ಮೇಲೆ ಹೋಗುತ್ತಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಪ್ರ ಸನ್ನಕುಮಾರ, ಡಿವೈಎಸ್ಪಿ ವೆಂಕನಗೌಡ ಪಾಟೀಲ, ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ

LEAVE A REPLY

Please enter your comment!
Please enter your name here