ಬೆಂಗಳೂರು, ಜು. 7: ರಾಜ್ಯ ದಲ್ಲಿ ಮಂಗಳವಾರ ವಿವಿಧ ಜಿಲ್ಲೆಗಳು ಸೇರಿದಂತೆ ಒಟ್ಟು 1498 ಕೊರೊನಾ ಪ್ರಕಣಗಳು ದಾಖಲಾ ಗಿವೆ.
ಕಳೆದ ಒಂದು ವಾರದಿಂದ 1000 ಮೇಲ್ಪಟ್ಟು ದಿನಂಪತ್ರಿ ಕೊ ರೊನಾ ಪ್ರಕರಣಗಳು ವರದಿಯಾ ಗುತ್ತಿದ್ದು, ಸಂಡೆ ಇರಲಿ ಮಂಡೇ ಇರಲಿ ಕೊರೊನಾ ಮಾತ್ರ ತನ್ನ ಆಟ ನಿಲ್ಲಿಸುತ್ತಿಲ್ಲ.
ಇಂದು ಮಾರಕ ರೋಗಕ್ಕೆ 15 ಜನರು ಬಲಿಯಾಗಿದ್ದು, ಇಲ್ಲಿ ವರೆಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 416ಕ್ಕೆ ಏರಿದೆ.
ಕರ್ನಾಟಕದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 26815 ತಲುಪಿದ್ದು, ಇಂದು 571 ಜನರು ಆಸ್ಪತ್ರೆಯಿಂದ ಬಿಡುಗಡೆ ಸೇರಿ ಒಟ್ಟು 11098 ಜನರು ಡಿಸ್ಚಾರ್ಜ ಆಗಿದ್ದಂತಾಗಿದೆ.
ಸಕ್ರೀಯವಾಗಿ ಒಟ್ಟು 15297 ಪ್ರಕರಣಗಳಿವೆ. ಕೋವಿಡ್ 19 ಅಲ್ಲದೇ ಅನ್ಯ ಕಾರಣದಿಂದ ಈ ವರೆಗೆ 4 ಜನರು ಮೃತಪಟ್ಟಿದ್ದಾರೆ.
ಮತ್ತೇ ಮತ್ತೇ ರಾಜಧಾನಿ ಬೆಂ ಗಳೂರಿಗೆ ಕೊರೊನಾ ಶನಿಯಾಗಿ ಬೆನ್ನಟ್ಟಿದ್ದು, ಕಳೆದ 24 ಗಂಟೆಗ ಳಲ್ಲಿ 800 ಜನರು ಈ ಕೊರೊನಾ ರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರಿ ದ್ದಾರೆ.
ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ ಮತ್ತು ಬೀದರ ತಲಾ 51 ಪ್ರಕರಣಗಳು, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊ ಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯ ಪುರ 22, ತುಮಕೂರು 16, ಕೊಡಗು 14, ಯಾದಗಿರಿ 10, ದಾವಣಗೆರೆ, ಕೋಲಾರ, ಹಾವೇರಿ ಚಾಮರಾಜನಗರ ಮತ್ತು ಚಿಕ್ಕ ಮಗಳೂರುಗಳಲ್ಲಿ ತಲಾ 6 ಪ್ರಕ ರಣಗಳು, ಕೊಪ್ಪಳ 5, ಗದಗ 4, ಚಿಕ್ಕಬಳ್ಳಾಪೂರ 3, ಚಿತ್ರದುರ್ಗ
ಬೆಂಗಳೂರಿನಲ್ಲಿ ಈವರೆಗೆ ಕೊರೊನಾಗೆ 155 ಅತಿ ಹೆಚ್ಚು ರಾಜ್ಯದಲ್ಲಿ ಬಲಿಯಾಗಿದ್ದು, ಇನ್ನು ಬೀದರನಲ್ಲಿ ಕೂಡಾ ಈ ಸಂಖ್ಯೆ 48ಕ್ಕೇರಿದ್ದು, ಕಲಬುರಗಿಯಲ್ಲಿ 29 ಕೋವಿಡ್ 19ಕ್ಕೆ ಬಲಿಯಾಗಿವೆ.
ಬಳ್ಳಾರಿಯಲ್ಲಿ ಕೂಡ 36 ಜನರು ಸಾವನ್ನಪ್ಪಿದ್ದು, ಧಾರವಾಡ, ದಾವಣಗೇರಿಗಳಲ್ಲಿ 13 ಜನರು, ವಿಜಯಪುರ, 13, ಬಾಗಲಕೋಟೆ 7 ಮತ್ತು ಹಾಸನದಲ್ಲಿಯೂ ಕೂಡಾ 10 ಜನರು ಮೃತಪಟ್ಟಿದ್ದಾರೆ.