ಕಲಬುರಗಿ, ಜೂನ್. 5: ನಗರದ ಹಿಂದಿ ಪ್ರಚಾರ ಸಭಾಂ ಗಣದ ಆವರಣದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾ ಧ್ಯಕ್ಷ ವೀರೆಂದ್ರ ಪಾಟೀಲ್ ರಾಯ ಕೋಡ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹೋರಾಟಗಾರರ ಹೆಸರುಗಳನ್ನು ಸಸಿಗಳಿಗೆ ನಾಮಕರಣ ಮಾಡು ವುದರ ಮೂಲಕ ಕಲ್ಯಾಣ ಕರ್ನಾ ಟಕ ಮಾನವ ಸಂಪನ್ಮೂಲ ಕೃಷಿ ಶಿಕ್ಷಣದ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸೇಡಂ ಅವರು ಸಸಿಗ ಳನ್ನು ನೆಟ್ಟುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಸಸಿ ನೇಟ್ಟು ಹೋರಾಟಗಾರರ ಅಭಿಮಾನಿ ಬಳಗದವರು ಪರಿಸರ ಪ್ರೇಮ ಮಾದರಿಯಾದದ್ದು ಜೋತೆಗೆ ಸ್ವಾತಂತ್ರ ಹೋರಾಟಗಾರರ ಹೆಸರು ಗಳನ್ನು ಸಸಿಗಳಿಗೆ ನಾಮ ಕರಣ ಮಾಡುವುದರ ಮೂಲಕ ಹೋರಾ ಟಗಾರರ ಹೆಸರು ಅಜರಾಮ ರವಾಗಿರುವಂತೆ ಮುಂದಿನ ಪಿಳಿಗೆಗೆ ಪರಿಚಯಿಸುವದರ ಮೂಲಕ ಕರ್ನಾಟಕ ಅಭಿಮಾನ ಹೆಮ್ಮೆಯ ಸಂಗತಿಯಾಗಿದೆ ಎಂದು ಸೇಡಂ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೃಷ್ಣಾಜಿ ಜೋಶಿ, ಅಶೋಕ ಗುರುಜಿ, ಡಾ.ಇಂದಿರಾ ಶಕ್ತಿ, ಅರವಿಂದ ಗೂರುಜಿ, ರಾಜು ಗೌಡನಾಗನಹಳ್ಳಿ, ಗೀರಿಶಗೌಡ ಇನಾಮದಾರ, ಶಿವಲಿಂಗ ಪಾಟೀಲ್, ಪ್ರಹ್ಲಾದ ಮಠಮಾರಿ, ನೀಕಿಲ ಕಿವುಡೆ, ಪ್ರದೀಪ ಇನ್ನಿತರರು ಇದ್ದರು.