ಕಲಬುರಗಿ ಜೂನ. 5: ಕೇಂದ್ರ ಮಾಜಿ ಸಚಿವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಿರಿಯ ಅನುಭವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು ಅಭ್ಯರ್ಥಿ ಎಂದು ಆಯ್ಕೆಗೊಳಿಸಿದ್ದಕ್ಕೆ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸಂಭ್ರಮಾಚರಸಿÀ ಎಲ್ಲರೂ ಖರ್ಗೆಜೀ ಪರ ಘೋಷಣೆ ಕೂಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಭೀಮರಾವ ತೇಗಲತಿಪ್ಪಿ, ಆಲಮಖಾನ, ಕೃಷ್ಣಾಜಿ ಕುಲಕರ್ಣಿ, ಮಜರಖಾನ, ಈರಣ್ಣಾ ಜಳಕಿ, ಮಾಪಣ್ಣಾ ಗಂಜಗೇರಿ, ಮಜರಖಾನ, ಶಾಮರಾವ ನಾಟೀಕಾರ, ರಾಜೀವ ಜಾನೆ, ಚಂದ್ರಿಕಾ ಪರಮೇಶ್ವರ, ಶಿವಾನಂದ ಪಾಟೀಲ ಮರತೂರ, ಸಂತೋಷ ಪಾಟೀಲ ಧನ್ನೂರ, ಬಾಬು ಒಂಟಿ, ಬಬ್ಲು ಚಿತ್ತಾಪೂರ, ಸಚೀನ ಶಿರವಾಳ, ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.