ಕಲಬುರಗಿ, ಜೂ. 16:ಕಲಬುರಗಿಯ 3ನೇ ಹೆಚ್ಚುವರಿ ಸಿನೀಯರ್ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ ಮುಗುತಿಯವರು ಇಂದು ಬೆಳಿಗ್ಗೆ ಹೃದಯಾಪಘಾತಕ್ಕೆ ಬಲಿಯಾಗಿದ್ದಾರೆ.
ಈ ಬಗ್ಗೆ ಹಿರಿಯ ನ್ಯಾಯವಾದಿಗ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ. ಪಸಾರ ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, ನ್ಯಾಯಾಲಯದ ಆವರಣ ಹಾಲ್ನಲ್ಲಿ ಈ ಘಟನೆ ನಡೆದಿಲ್ಲವೆಂದು ಸ್ಪಷ್ಟಪಡಿಸಿ, ಮನೆಯಲ್ಲಿರಬೇಕಾದರೆ ಬೆಳಿಗ್ಗೆ 9.45ಕ್ಕೆ ತಿಂಡಿ ಮುಗಿಸಿ, ಹೊರಬೇಕೆನ್ನುವಷ್ಟರಲ್ಲಿ ಎದೆ ನೋವು ಕಾಣಿಸಿಕೊಂಡಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದರು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ರಬಕವಿ, ಬನಹಟ್ಟಿ ಮೂಲದ ಇವರು ಕಳೆದ 15 ದಿನಗಳ ಹಿಂದೆ ಕಲಬುರಗಿಗೆ ವರ್ಗವಾಗಿದ್ದರು.
ಈ ಮುಂಚೆ ದಾವಣಗೇರೆ ಜಿಲ್ಲಾ ನ್ಯಾಯಾಲದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು.
44 ವರ್ಷದ ವಿಶ್ವನಾಥ ಮುಗುತಿ ಹೆಂಡತಿ ಮತ್ತು ಓರ್ವ 4 ವರ್ಷದ ಪುತ್ರಿ, ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.