ಕಲಬುರಗಿ ಡಿಸಿ ವಿರುದ್ಧದ ಹೇಳಿಕೆ ಹಿಂಪಡೆದ ಎನ್. ರವಿಕುಮಾರ

0
1044

ಬೆಂಗಳೂರು, ಮೇ. 26: ಇತ್ತೀಚೆಗೆ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ನಡೆದ ಪ್ರತಿಭಟನೆ ರ‍್ಯಾಲಿ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ಮಾಡಿದ ಟೀಕೆಗೆ ನಾನು ವಿಷಾಧ ವ್ಯಕ್ತಪಡಿಸುತ್ತೇನೆ ಅಲ್ಲದೇ ನಾನು ಆ ಹೇಳಿಕೆಯನ್ನು ಕೂಡಲೇ ಹಿಂಪಡೆದಿದ್ದೇನೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿ ಕುಮಾರ್ ಅವರು ಹೇಳಿದ್ದಾರೆ.
ಅವರಿಂದ ಪತ್ರಿಕಾ ಪ್ರಕಟಣೆ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ನಾನು ದಿನಾಂಕ 24.05.2025 ರಂದು ಪ್ರತಿಭಟನೆ ಸಂದರ್ಭದಲ್ಲಿ ಮಾಡಿದ ಅಜಾಗರೂಕ ಟೀಕೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇ£ಎಂದಿದ್ದಾರೆ.
ಆ ಜಿಲ್ಲಾಧಿಕಾರಿ ಅವರು ಅತ್ಯಂತ ಗೌರವಪಾತ್ರರು, ಅವರ ವೃತ್ತಿಪರ ಸಾಮರ್ಥ್ಯ ಮತ್ತು ಪ್ರಾಮಾಣಿಕತೆಯ ಬಗ್ಗೆ ನನಗೆ ಯಾವುದೇ ಅಪವಾದವಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂದು ನೀಡಿದ ಹೇಳಿಕೆಯು ಉದ್ದೇಶಪೂರ್ವಕವಾಗಿಯು ನೀಡಿಲ್ಲ. ಬಾಯಿ ತಪ್ಪಿನಿಂದ ಆ ಹೇಳಿಕೆ ಬಂದಿದೆ. ಆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆ ಅಧಿಕಾರಿಯ ಸೇವಾ ಮನೋಭಾವನೆ, ಸರ್ಕಾರಿ ಸೇವೆಯ ಬಗ್ಗೆ ನಾನು ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here