ಮಾನವ ಹಕ್ಕುಗಳ ಆಯೋಗದಿಂದ ಪರಿಸರ ದಿನಾಚರಣೆ

ಕಲಬುರಗಿ: ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಬವರಾಜ ಪಾಟೀಲ್ ಹಾವನೂರು, ಕಾರ್ಯಾಧ್ಯಕ್ಷ ಸಂದೀಪಕುಮಾರ ಹತ್ತಿ ಕೊಗನೂರ, ಉಪಾಧ್ಯಕ್ಷ ಸಕ್ಕರೆಪ್ಪ ಗೌಡ ಪಾಟೀಲ್, ನಗರ ಅಧ್ಯಕ್ಷ ಪ್ರಜೋತ ಕದಮ, ರಾಘವೇಂದ್ರ ಪಾಟೀಲ್, ಘಾಳಪ್ಪಾ, ಯೋಗೆಶ ಪಾಟೀಲ್, ಸಚಿನ್ ಕಡಗಂಚಿ, ಸಂತೋಷ ಪಾಟೀಲ್ ಇದ್ದರು.