ಕಲಬುರಗಿ,ಏ.29:ಕಲಬುರಗಿ ಕೇಂದ್ರ ಕಾರಾಗೃಹ, ಸೋಕೇರ್ ಇಂಡ್ ಸಂಸ್ಥೆ ಕಲಬುರಗಿ, ಅದಾನಿ ಸಂಸ್ಥೆ ವಾಡಿ ಇವುಗಳ ಸಹಯೋಗದೊಂದಿಗೆ ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿಗಳಿಗೆ (ಕಂಪ್ಯೂಟರ್ ತರಬೇತಿದಾರರಿಗೆ) ಪ್ರಮಾಣಪತ್ರ, ಕಿಟ್ ವಿತರಿಸುವ ಹಾಗೂ ಪ್ರವಚನ (ಉಪನ್ಯಾಸ) ಕಾರ್ಯಕ್ರಮವನ್ನು ಸೋಮವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಯಿತು.


ಬೆಂಗಳೂರಿನ ಅದ್ವೆöÊತ ಮಹಾಮಂಡಲದ ಅಧ್ಯಕ್ಷರು ಹಾಗೂ ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ, ಮಹಾಗುರು, ಶ್ರೇಷ್ಠ ವಾಗ್ಮಿಗಳು ಹಾಗೂ ಉಪನ್ಯಾಸಕರಾದ ಡಾ|| ಪವಗಡ ಪ್ರಕಾಶರಾವ್ ಅವರು ಕಾರ್ಯಕ್ರಮ ಉದ್ಘಾಟಿಸಿ ಕಂಪ್ಯೂಟರ್ ತರಬೇತಿ ಪಡೆದ 3ನೇ ತಂಡದ ಪ್ರಮಾಣ ಪತ್ರ ಹಾಗೂ 4ನೇ ತಂಡಕ್ಕೆ ಕಿಟ್ ವಿತರಿಸಿ ಮಾತನಾಡಿ, “ಸಜ್ಜನರ ಸಂಗ ಹೆಜ್ಜೇನು ಸವಿದಂತೆ” ಸತ್ಯವಂತರ ಒಳ್ಳೆಯವರ ಜೊತೆ ಒಡನಾಟವನ್ನು ಬೆಳೆಸಿ ಸಹೋದರತ್ವವನ್ನು ಬೆಳೆಸಿಕೊಂಡು ಒಳ್ಳೆಯವರಾಗಿ ಉತ್ತಮ ಜೀವನ ನಡೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸಂಸ್ಥೆಯ ಮುಖ್ಯಸ್ಥೆ ಡಾ|| ಅನಿತಾ ಆರ್. ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಅಧೀಕ್ಷಕ ಎಂ.ಹೆಚ್. ಆಶೇಖಾನ್, ವಿದ್ಯಾಸಾಗರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಶ್ಯಾಮರಾವ್ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಶಿವಯೋಗಪ್ಪ, ಹರಿಷ್ ಗೌಳಿ ಹಾಗೂ ಈ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ ಡಾಂಗೆ, ಸಂಸ್ಥೆಯ ಜೈಲರ್ಗಳಾದ ಸುನಂದ, ಸಾಗರ ಪಾಟೀಲ, ಶ್ರೀಮಂತಗೌಡ ಪಾಟೀಲ, ಶಾಮ ಬಿದ್ರಿ ಹಾಗೂ ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.